ಪುತ್ತೂರು: ಭಾರತೀಯ ಜನತಾ ಪಾರ್ಟಿ ಕೊಳ್ತಿಗೆ ಶಕ್ತಿ ಕೇಂದ್ರದ ಸಂಘಟನಾ ಸಭೆಯು ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ. ರಾಧಾಕೃಷ್ಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಪಕ್ಷ ಸಂಘಟನೆಯ ಕುರಿತು ಬೂತ್ ಅಧ್ಯಕ್ಷರಿಂದ ವರದಿಗಳನ್ನು ಪಡೆಯಲಾಯಿತು. ಕೊಳ್ತಿಗೆ ಗ್ರಾಮದಲ್ಲಿ ಶಾಸಕರ ನೇತೃತ್ವದಲ್ಲಿ ನಡೆದಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಯಲ್ಲಿ ಕಾರ್ಯಕರ್ತರಿಂದ ಮೆಚ್ಚುಗೆ ವ್ಯಕ್ತವಾಯಿತು. ಸಂಘಟನೆಯ ಬಗ್ಗೆ ವಿವಿಧ ಸಲಹೆಗಳನ್ನು ನೀಡಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಒ.ಬಿ.ಸಿ ಮೋರ್ಚಾದ ಅಧ್ಯಕ್ಷರು, ಕೊಳ್ತಿಗೆ ಶಕ್ತಿ ಕೇಂದ್ರದ ಉಸ್ತುವಾರಿಗಳಾದ ಆರ್.ಸಿ. ನಾರಾಯಣ, ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ ಮತ್ತು ನಿತೀಶ್ ಶಾಂತಿವನ, ತಾಲೂಕು ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಮೀನಾಕ್ಷಿ ಮಂಜುನಾಥ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಜಯಕುಮಾರ್ ರೈ ಕೊರಂಗ ಮತ್ತು ಪ್ರಧಾನ ಕಾರ್ಯದರ್ಶಿ ತೀರ್ಥಾನಂದ ಗೌಡ ದುಗ್ಗಳ, ತಾಲೂಕು ಕಾರ್ಯದರ್ಶಿ ಯತೀಂದ್ರ ಕೊಚ್ಚಿ, ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಾಗವೇಣಿ ಮತ್ತು ಕೊಳ್ತಿಗೆ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರಾದ ಸತೀಶ್ ಪಾಂಬಾರು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಲತಾ ಕೆ ಮತ್ತು ಅಕ್ಕಮ್ಮ, ಸಿ.ಎ. ಬ್ಯಾಂಕ್ ನಿರ್ದೇಶಕರಾದ ಅಣ್ಣಪ್ಪ ನಾಯ್ಕ, ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಡಿ ವಿಶ್ವನಾಥ ರೈ, ಕೊಳ್ತಿಗೆ ಬಿಜೆಪಿ ಬೂತ್ ಗಳ ಅಧ್ಯಕ್ಷರಾದ ರಜನೀಶ ಕುಂಟಿಕಾನ, ಶ್ರೀನಿವಾಸ ದೊಡ್ಡಮನೆ, ಶೋಭಿತ್ ಕೆಮ್ಮಾರ, ರತ್ನಾಕರ ಪೆರ್ಲಂಪಾಡಿ, ಎನ್ ಜನಾರ್ದನ ನಾಯ್ಕ, ಬೂತ್ ಕಾರ್ಯದರ್ಶಿಗಳಾದ ಹರಿಪ್ರಸಾದ್ ಕೆ ಬಿ, ಅಶೋಕ್ ಒರ್ಕೊಂಬು, ಪಿ ವೆಂಕಟ್ರಮಣ ಪೆರ್ಲಂಪಾಡಿ, ಕೊಳ್ತಿಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಿರಿಜ ಧನಂಜಯ ಪೂಜಾರಿ, ತಾಲೂಕು ಒ.ಬಿ.ಸಿ ಮೋರ್ಚಾ ಸದಸ್ಯರಾದ ಧನಂಜಯ ಪೂಜಾರಿ, ತಾಲೂಕು ಸಮಿತಿ ಸದಸ್ಯ ಉದಯಕುಮಾರ್ ಜಿ ಕೆ, ಯುವ ಜಿಲ್ಲಾ ಸಮಿತಿ ಸದಸ್ಯರಾದ ಮೋಕ್ಷಿತ್ ಬಾಯಂಬಾಡಿ, ಎಸ್.ಟಿ ಮೋರ್ಚಾ ತಾಲೂಕು ಸಮಿತಿಯ ಸದಸ್ಯ ಹರೀಶ್ ಸರಸ್ವತಿಮೂಲೆ, ಪ್ರಮುಖರಾದ ಸುಶೀಲ, ಯಂ ಜನಾರ್ದನ ಪೂಜಾರಿ ಮೇರಡ್ಕ, ಗ್ರಾಮದ ಮಹಿಳಾ ಅಧ್ಯಕ್ಷರಾದ ಮಂಜುಳ ಉದಯಕುಮಾರ್, ತಾಲೂಕು ಎಸ್.ಸಿ ಮೋರ್ಚಾದ ಕಾರ್ಯದರ್ಶಿ ಲೋಹಿತ್ ಅಮ್ಚಿನಡ್ಕ, ಪ್ರಮುಖರು ಭಾಗವಹಿಸಿದ್ದರು. ಸತೀಶ್ ಪಾಂಬಾರು ರವರು ಸ್ವಾಗತಿಸಿ, ನಾಗವೇಣಿ ಕೆ ವಂದಿಸಿದರು.