ಪುತ್ತೂರು: ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ವಿಶ್ವಬ್ಯಾಂಕ್ ನೆರವಿನ ರಾಷ್ಟ್ರಮಟ್ಟದ ರಿವಾರ್ಡ್ ಯೋಜನೆ, ಜಲನಯನ ಉತ್ಕೃಷ್ಟ ದ (ಸಿಓಇ )ಉದ್ಘಾಟನೆ ಮತ್ತು ಎಫ್ ಪಿ ಓ ಗಳ ಏಕರೂಪ ಬ್ರ್ಯಾಂಡಿಂಗ್ ಸ್ಪರ್ಧೆಯ ಅನಾವರಣ ಹಾಗೂ ಅತ್ಯುತ್ತಮ ರೈತ ಉತ್ಪದಕರ ಸಂಸ್ಥೆಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮೇ.8 ರಂದು ನಡೆಯಿತು. ಸ್ಪರ್ಧೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಿಂದ `ಪುತ್ತೂರ ಮುತ್ತು ರೈತ ಉತ್ಪದಕ ಸಂಸ್ಥೆ’ ಭಾಗವಹಿಸಿ, ಹಾಳೆತಟ್ಟೆ, ಸಿಗಡಿ ಚಟ್ನಿ, ಜೇನುತುಪ್ಪ, ಹಪ್ಪಳ ಮತ್ತು ಮೀನಿನ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿ ಪ್ರಶಂಸೆ ಪಡೆದುಕೊಂಡಿತು. ಪುತ್ತೂರ ಮುತ್ತು ಸಂಸ್ಥೆಯ ಉಪಾಧ್ಯಕ್ಷರಾದ ಹರೀಶ್ ಬೀಜತ್ರೆ, ನಿತೀಶ್ ಕುಮಾರ್ ಶಾಂತಿವನ, ರಾಧಾಕೃಷ್ಣ ರೈ, ಪ್ರದೀಪ್ ಪಾಟಾಳಿ ಮತ್ತಿತರರು ಕಾರ್ಯಕ್ರಮ ಭಾಗವಹಿಸಿದ್ದರು.