ಪುತ್ತೂರು: ಇತ್ತೀಚೆಗೆ ನಿಧನರಾದ ಕುರಿಯ ಗ್ರಾಮದ ಸಂಪ್ಯ ಬೈಲಾಡಿ ದಿ.ಸಾಂತಪ್ಪ ಪೂಜಾರಿಯವರ ಪತ್ನಿ ಸುಶೀಲ(ರತ್ನ)ಬೈಲಾಡಿಯವರಿಗೆ ಶ್ರದ್ಧಾಂಜಲಿ ಸಭೆಯು ಮೇ.23ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಯಿತು.
ನುಡಿ ನಮನ ಸಲ್ಲಿಸಿದ ಸುಧಾಕರ ಉಪ್ಪಿನಂಗಡಿಯವರು ಮಾತನಾಡಿ, ಬಡಾವು ಕುಟುಂಬದಲ್ಲಿ ಹುಟ್ಟಿದ ಸುಶೀಲರವರು ಪರೋಪಕಾರ, ಸೇವೆ, ಸಂಸ್ಕಾರಗಳನ್ನು ಮೈಗೂಡಿಸಿಕೊಂಡವರು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿದವರು. ಮಕ್ಕಳನ್ನು ಸಮಾಜ ಸೇವಕರನ್ನಾಗಿ ನೀಡಿರುವುದಲ್ಲದೆ, ಹಸಿದವರ ಹಸಿವು ನೀಗಿಸಿದ ಮಹಾತಾಯಿಯಾಗಿದ್ದಾರೆ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆಡೆಂಜಿ, ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಅಖಿಲ ಭಾರತ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗಣೇಶ್ ರೈ ಮೂಲೆ, ಆರ್ಯಾಪು ಗ್ರಾ.ಪಂ ಸದಸ್ಯ ನೇಮಾಕ್ಷ ಸುವರ್ಣ, ಮಾಜಿ ಸದಸ್ಯ ಸದಾನಂದ ಶೆಟ್ಟಿ ಕೂರೆಲು, ನಗರ ಸಭಾ ಸದಸ್ಯ ಶೀನಪ್ಪ ನಾಯ್ಕ, ಉದ್ಯಮಿ ಶಿವರಾಮ ಆಳ್ವ, ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ರಮೇಶ್ ರೈ ಮೊಟ್ಟೆತ್ತಡ್ಕ, ಮೃತರ ಪುತ್ರರಾದ ವಿಜಯ ಬಿ.ಎಸ್., ಲಕ್ಷ್ಮಣ್ ಬಿ., ಮೀನಾಕ್ಷಿ, ಅಶೋಕ, ಸೊಸೆಯಂದಿರಾದ ಪೂರ್ಣೀಮಾ ಸಿ., ನಿಶಿತಾ, ಸುನೀತಾ, ಅಳಿಯ ನವೀನ್ ಕುಮಾರ್, ಸಹೋದರರಾದ ಸುಂದರ ಪೂಜಾರಿ ಬಡಾವು, ಸಂಜೀವ ಪೂಜಾರಿ ಬಡಾವು, ಜಯರಾಮ ಪೂಜಾರಿ ಬಡಾವು, ಸಹೋದರಿಯರಾದ ಸುನಂದ, ಲಲಿತ, ಪ್ರೇಮಲತಾ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.