ಸವಣೂರು : ಇಲ್ಲಿನ ಸರಕಾರಿ ಉ ಹಿ ಪ್ರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆಗೆ ಪ್ರಜಾಪ್ರಭುತ್ವ ರೀತಿಯಲ್ಲೇ ಚುನಾವಣೆಯನ್ನು ನಡೆಸಲಾಯಿತು.
2 ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸಿದ್ದರು.18 ವರ್ಷ ದಾಟಿದವರು ಹೇಗೆ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೋ ಅದೇ ರೀತಿ ಶಾಲೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.
ಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯಗುರು ಬಾಲಕೃಷ್ಣ ಕೆ, ಮತ್ತು ಉಳಿದ ಚುನಾವಣಾ ಸಿಬ್ಬಂದಿಗಳಾಗಿ ಶಿಕ್ಷಕರಾದ ತುಳಸಿ ಎಚ್, ಮೇಬಲ್ ರೋಡ್ರಿಗಸ್, ಆಶಾಲತ ಕೆ., ಮಲ್ಲಿಕಾ, ಆಶಾ ಎಮ್, ಹರ್ಷಿಣಿ ಕಾರ್ಯನಿರ್ವಹಿಸಿದರು.
ಮಂತ್ರಿಮಂಡಲ ರಚನೆ- ಶಾಲಾ ವಿದ್ಯಾರ್ಥಿ ನಾಯಕನಾಗಿ 8ನೇ ತರಗತಿಯ ಮಹೇಶ್,ಕಾರ್ಯದರ್ಶಿಯಾಗಿ ನಂದೀಶ್ ಆಯ್ಕೆಯಾದರು.
ಗೃಹ ಮಂತ್ರಿಯಾಗಿ ಪ್ರೇಕ್ಷಕ್, ವಿದ್ಯಾ ಮಂತ್ರಿಯಾಗಿ ಫಾತಿಮತ್ ರಿಫುನ, ಪೃಥ್ವಿ, ಕ್ರೀಡಾಮಂತ್ರಿಯಾಗಿ, ರಫಿಕ್, ರಿಝಾನ, ಆರೋಗ್ಯ ಮಂತ್ರಿಯಾಗಿ, ರಶ್ವಿತ್, ಅಸ್ನ ಫಾತಿಮ, ತೋಟಗಾರಿಕೆ ದೀಪಕ್,ತೇಜಸ್ಗ್ರಂ ಥಾಲಯ:ಮೋಕ್ಷ , ದಕ್ಷ, ಪೃಥ್ವಿನ್, ಸಾಂಸ್ಕೃತಿಕ :ಹರ್ಷಿಕ ಮತ್ತು ಅರ್ಪಿತ ಇವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.