ಪುತ್ತೂರು:ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಗುಂಡಿಗದ್ದೆ ನಿವಾಸಿಯಾಗಿದ್ದ ಪ್ರಗತಿಪರ ಕೃಷಿಕ ಬೈಲುಗುತ್ತು ನೂಜಿಗದ್ದೆ ಮಹಾಬಲ ರೈ (82ವ.)ರವರು ಮೇ 20ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ ಸುಶೀಲ ರೈ, ಪುತ್ರರಾದ ರತ್ನಾಕರ ರೈ, ಹರೀಶ ರೈ, ರಾಜೇಶ್ ರೈ, ಪುತ್ರಿಯರಾದ ಸಂಪಾವತಿ,ಶೀಲಾವತಿ, ವಿನೋದಾ ಕುಮಾರಿ, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸಲ್ಲಿಸಿದ್ದಾರೆ.