ಪುತ್ತೂರು: ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿ2022-23ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ನಡೆಯಿತು. ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿ.ಯು.ಸಿ ಕಲಾ ವಿಭಾಗದ ಗುರುದತ್ ನಾಯಕ್ಆಯ್ಕೆಯಾದರು. ಈತನು ಪುತ್ತೂರು ನರಿಮೊಗರಿ ನಗಣೇಶ್ ನಾಯಕ್ ಮತ್ತು ಕೆ ವೀಣಾದಂಪತಿ ಪುತ್ರ. ಉಪಾಧ್ಯಕ್ಷೆಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ರುದ್ಧಿ ಎಂ ವಿ ಆಯ್ಕೆಯಾದರು.ಈಕೆ ನೆಹರೂನಗರದ ವಿಜಯ್ಕುಮಾರ್ ಮತ್ತು ಶಾಂತಿದಂಪತಿ ಪುತ್ರಿ. ದ್ವಿತೀಯ ಪಿ.ಯು.ಸಿ ವಿಜ್ಞಾನವಿ ಭಾಗದ ಕೀರ್ತನ್ವಿದ್ಯಾರ್ಥಿಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದರು.ಈತನು ಬೊಳುವಾರಿನ ಟಿ. ಪಾಂಡಿಕಣ್ಣನ್ ಮತ್ತು ಜಯಂತಿರವರ ಪುತ್ರ.ಜತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯವಿಭಾಗದ ಧನುಷ(ಹುಣಸೂರಿನ ಲಕ್ಷ್ಮಣ ಮತ್ತು ಮಂಜುಳಾ ದಂಪತಿ ಪುತ್ರಿ) ಮತ್ತು ವಿಜ್ಞಾನ ವಿಭಾಗದ ಪ್ರತೀಕ್ಷಾ ಎ ಕೆ(ಕಬಕದಆನಂದಗೌಡ ಕೆ ಮತ್ತು ಪಿ. ದೇಜಮ್ಮದಂಪತಿ ಪುತ್ರಿ)ಆಯ್ಕೆಯಾದರು. ಕ್ರೀಡಾ ಸಂಘದ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ರಜತ್ ಆರ್ ಭಟ್(ವಿಟ್ಲದರಾಜೇಶ್ ಭಟ್ ಮತ್ತುರಾಧಿಕಾ ಭಟ್ದಂಪತಿ ಪುತ್ರ) ಹಾಗೂ ಕ್ರೀಡಾಜತೆ ಕಾರ್ಯದರ್ಶಿಯಾಗಿ ಖುಷಿ ರೈ(ಕುಂಬ್ರದರಾಧಾಕೃಷ್ಣರೈ ಮತ್ತು ಸುನೀತಾರೈದಂಪತಿ ಪುತ್ರಿ) ಆಯ್ಕೆಯಾದರು. ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಶ್ರೇಯಜೆ. ಶೆಟ್ಟಿ(ಮುಂಬೈಯಜಯಾನಂದಜೆ ಶೆಟ್ಟಿ ಮತ್ತು ಸುಮತಿಜೆ ಶೆಟ್ಟಿದಂಪತಿ ಪುತ್ರಿ) ಆಯ್ಕೆಯಾದರು. ಕಾಲೇಜಿನಪ್ರಾಂಶುಪಾಲಮಹೇಶ ನಿಟಿಲಾಪುರ, ವಿದ್ಯಾರ್ಥಿಕ್ಷೇಮಪಾಲಕದೇವಿಪ್ರಸಾದ್, ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಲಲಿತ ಕಲಾ ಸಂಘದ ಸಂಯೋಜಕ ಶ್ರೀಧರ ಶೆಟ್ಟಿಗಾರ್ಮತ್ತುಉಪನ್ಯಾಸಕರು ವಿದ್ಯಾರ್ಥಿ ಸಂಘದನಾಯಕರನ್ನು ಅಭಿನಂದಿಸಿದರು.