ಪುತ್ತೂರು: ಕುರಿಯ ಏಳ್ನಾಡುಗುತ್ತು ಕುಟುಂಬದ ಹಿರಿಯರಾದ ಸರ್ವಾಣಿ ಎಲ್ ಆಳ್ವ ( 90 ವ )ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಜು.05 ರಂದು ನಿಧನರಾದರು. ಮೃತರು ಪುತ್ರಿಯರಾದ ಉಷಾ ಹೇಮರಾಜ್ ಶೆಟ್ಟಿ, ಪುಷ್ಪಕಿರಣ ಪ್ರದೀಪ್ ರೈ, ಸುಚೇತ ಎಸ್.ಹೆಗ್ಡೆ, ಕು.ಶರಣಾಕ್ಷಿ ಆಳ್ವ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬೂಡಿಯಾರ್ ರಾಧಾಕೃಷ್ಣ ರೈ ದಂಪತಿ ಹಾಗೂ ಕುಟುಂಬದ ಅನೇಕ ಮಂದಿ ಸದಸ್ಯರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.