ಉಪ್ಪಿನಂಗಡಿ: ರಾಮಕುಂಜ ಗ್ರಾಮದ ಪಾಲೆತ್ತಡಿ ಎಂಬಲ್ಲಿ ಗಾಳಿ ಮಳೆಗೆ ಅಡಿಕೆ ಮರಗಳು ತುಂಡಾಗಿ ಬಿದ್ದಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ನಾಶವಾಗಿರುವುದಾಗಿ ವರದಿಯಾಗಿದೆ.
ಪಾಲೆತ್ತಡಿ ನಿವಾಸಿ ಇಸ್ಮಾಯಿಲ್ ಎಂಬವರ ತೋಟದಲ್ಲಿ ಸುಮಾರು 10ಕ್ಕೂ ಅಽಕ ಅಡಿಕೆ ಮರಗಳು ತುಂಡಾಗಿ ಬಿದ್ದಿದೆ. ಇನ್ನಷ್ಟು ಮರಗಳು ಬಾಗಿಕೊಂಡಿದ್ದು, ಅಡಿಕೆ ಗೊನೆಗಳು ನೆಲಕ್ಕಪ್ಪಳಿಸಿ ಬಿದ್ದಿದೆ. ತೋಟದ ಒಳಗೆ ವಿದ್ಯುತ್ ಸಂಪರ್ಕದ ವೈರ್ ಹಾದು ಹೋಗಿದ್ದು, ಇದರ ಮೇಲೆ ಅಡಿಕೆ ಮರ ಬಿದ್ದ ಪರಿಣಾಮ ವಿದ್ಯುತ್ ತಂತಿಯೂ ತುಂಡಾಗಿ ಬಿದ್ದಿದೆ ಎಂದು ಹೇಳಲಾಗಿದೆ.