ಪುತ್ತೂರು: ದೊಡ್ಡಡ್ಕ ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರದ ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಂದಿರದ ವಠಾರದಲ್ಲಿ ನಡೆದ ಸಭೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಕೊರಗಪ್ಪ ನಾಯ್ಕ್ ಜಂಗಮೊಗೆರು, ಉಪಾಧ್ಯಕ್ಷರಾಗಿ ಗಣಪತಿ ನಾಯ್ಕ್ ಪಾಲೆಚ್ಚಾರು, ಕಾರ್ಯದರ್ಶಿಯಾಗಿ ನಾರಾಯಣ ನಾಯ್ಕ್ ದೊಡ್ಡಡ್ಕ, ಕೋಶಾಧಿಕಾರಿಯಾಗಿ ಲೋಕೇಶ್ ಬಲ್ಯಾಯ ದೊಡ್ಡಡ್ಕ, ಜೊತೆ ಕಾರ್ಯದರ್ಶಿಯಾಗಿ ಚೆನ್ನಕೇಶವ ಆಚಾರ್ಯ ದೊಡ್ಡಡ್ಕ ರವರನ್ನು ಆಯ್ಕೆಮಾಡಲಾಯಿತು.
ಶ್ರೀ ಮಹಾಲಕ್ಷ್ಮೀ ಭಜನಾ ಸಮಿತಿಯ ಅಧ್ಯಕ್ಷರಾಗಿ ಯೋಗೀಶ್ ನಾಯ್ಕ್ ದೊಡ್ಡಡ್ಕ, ಕಾರ್ಯದರ್ಶಿ ದಯಾನಂದ ನಾಯ್ಕ್ ದೊಡ್ಡಡ್ಕ, ಕೋಶಾಧಿಕಾರಿಯಾಗಿ ಯೋಗೀಶ್ ಬಲ್ಯಾಯ ದೊಡ್ಡಡ್ಕರವರನ್ನು ಆಯ್ಕೆ ಮಾಡಲಾಯಿತು. ಗಣಪತಿ ನಾಯಕ್ ಪಾಲೆಚ್ಚಾರು ಸ್ವಾಗತಿಸಿ, ಜಗದೀಶ್ ಭಂಡಾರಿ ವಂದಿಸಿದರು.