ಪುತ್ತೂರು: ದ.ಕ. ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ ಪುತ್ತೂರಿನ ಬೊಳ್ವಾರ್ ನಿವಾಸಿ ಕಸ್ತೂರಿಯವರು ಗುರುವಾಯನಕೆರೆಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಓಮ್ನಿಯೊಂದು ಅತೀ ವೇಗದಲ್ಲಿ ಬಂದು ಅವರಿಗೆ ಡಿಕ್ಕಿಯಾಗಿ ಪರಾರಿಯಾದ ಘಟನೆ ಜು.22 ರಂದು ನಡೆದಿದೆ.
ಕಸ್ತೂರಿಯವರು ಗುರುವಾಯನಕೆರೆ ಜಂಕ್ಷನ್ ನಲ್ಲಿ ರಸ್ತೆ ದಾಟುವಾಗ ಅತಿಯಾದ ವೇಗದಿಂದ ಬಂದ ಮಾರತಿ ಓಮ್ನಿ ಅವರಿಗೆ ಡಿಕ್ಕಿಯಾಗಿ ಪರಾರಿಯಾಗಿದೆ. ಮಾರುತಿ ಓಮ್ನಿಯ ಸೈಡ್ ಮಿರರ್ ಕಸ್ತೂರಿ ಅವರ ಬಲ ಅಂಗೈಗೆ ತಾಗಿದೆ. ಈ ಬಗ್ಗೆ ಪೊಲೀಸ್ ದೂರು ನೀಡಲು ಸಿ.ಸಿ. ಕ್ಯಾಮರಾ ದೃಶ್ಯಾವಳಿಯನ್ನು ಪರೀಕ್ಷಿಸಿ ಮಾಹಿತಿ ನೀಡುವಂತೆ ಸ್ಥಳೀಯ ಟ್ರಾಫಿಕ್ ಪೊಲೀಸರಲ್ಲಿ ವಿನಂತಿಸಿದ್ದಾರೆಂದು ತಿಳಿದುಬಂದಿದೆ.