- ಗೌರವಾಧ್ಯಕ್ಷರಾಗಿ ಸುಧೀರ್ ಶೆಟ್ಟಿ ನೇಸರ, ಅಧ್ಯಕ್ಷರಾಗಿ ಪ್ರಶಾಂತ್ ಆಚಾರ್ಯ ಆಯ್ಕೆ
ಪುತ್ತೂರು: ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ನಡೆಯಲಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಸುಧೀರ್ ಶೆಟ್ಟಿ ನೇಸರ, ಅಧ್ಯಕ್ಷರಾಗಿ ಪ್ರಶಾಂತ್ ಆಚಾರ್ಯ ಮುಂಡೂರು, ಕಾರ್ಯಾಧ್ಯಕ್ಷರಾಗಿ ರಾಘವೇಂದ್ರ ಪಜಿಮಣ್ಣು, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಶೆಟ್ಟಿ ಪಟ್ಟೆ ಹಾಗೂ ಕೋಶಾಧಿಕಾರಿಯಾಗಿ ಸದಾಶಿವ ಗೌಡ ಹಾಗೂ ಜೊತೆ ಕಾರ್ಯದರ್ಶಿಯಾಗಿ ಹರೀಶ್ ನಾಯ್ಕ ಮತ್ತು ಶೇಷಪ್ಪ ಶೆಟ್ಟಿ ಪೊನೋಣಿ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಡಾ.ರವಿ ಶೆಟ್ಟಿ ನೇಸರ, ಶ್ರೀರಂಗ ಶಾಸ್ತ್ರಿ, ಅರುಣ್ ಕುಮಾರ್ ಪುತ್ತಿಲ, ಮುರಳೀಧರ ಭಟ್ ಬಂಗಾರಡ್ಕ, ದುಗ್ಗಪ್ಪ, ಜಯಪ್ರಸಾದ್ ಮುಂಡೂರು, ಧನಂಜಯ ಕುಲಾಲ್, ಅನಿಲ್ ಕಣ್ಣಾರ್ನೂಜಿ ಹಾಗೂ ಉಮೇಶ್ ಗುತ್ತಿನಪಾಲುರವರನ್ನು ಆಯ್ಕೆ ಮಾಡಲಾಯಿತು.