ಪುತ್ತೂರು: ದಕ್ಷಿಣ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ಮತ್ತು ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿ ಇದರ ಸಹಯೋಗ ದೊಂದಿಗೆ ಜುಲಾಯಿ ೩೦ ರಂದು ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ೧೦ನೇ ತರಗತಿಯ ಮೃಣಾಲ್ ಮಸ್ಕರೇನಸ್ರವರು ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಶ್ರೀಯುತ ಜೊಸೇಪ್ ಮನೋಜ್ ಮಸ್ಕರೇನಸ್ ಮತ್ತು ಶ್ರೀಮತಿ ಪ್ರಪುಲ್ಲಾ ಸಲ್ಡಾನ ದಂಪತಿಗಳ ಪುತ್ರಿ.