ಪುತ್ತೂರು : 2022ನೇ ಸಾಲಿನಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ವಿಷ್ಣುಮಯೂರ ಕೆ.ರವರು ತೇರ್ಗಡೆ ಹೊಂದಿದ್ದಾರೆ. ಕೆದಿಲ ನಿವಾಸಿ ಪುತ್ತೂರು ಕನ್ಸ್ಟ್ರಕ್ಷನ್ ಮಾಲಕ ಕೆ.ವಸಂತ ಭಟ್ ಮತ್ತು ವಸುಧಾ ದಂಪತಿ ಪುತ್ರರಾದ ಇವರು ನೆಹರೂನಗರ ವಿವೇಕಾನಂದ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿದ್ದು ಮೈಸೂರಿನ ಸಿಎ ಸದಾಶಿವ ಭಟ್ರವರಲ್ಲಿ ತರಬೇತಿ ಪಡೆದಿದ್ದರು.