ಉಪ್ಪಿನಂಗಡಿ: ನಾಗರ ಪಂಚಮಿಯ ಮಂಗಳವಾರದಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ನಾಗಬನದಲ್ಲಿ ನೂರಾರು ಭಕ್ತಾದಿಗಳಿಂದ ಶ್ರದ್ಧೆಯ ನಾಗಾರಾಧನೆ ನಡೆಯಿತು.
ಭಕ್ತಾದಿಗಳು ನಾಗ ದೇವರಿಗೆ ಕ್ಷೀರಾಭಿಷೇಕ, ಸಿಯಾಳಾಭಿಷೇಕ, ನಾಗತಂಬಿಲ ಸೇವೆಯನ್ನುಗೈದು ಪುನೀತರಾದರು. ನಾಗರ ಪಂಚಮಿಯ ಅಂಗವಾಗಿ ಉಪ್ಪಿನಂಗಡಿಯ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ವನಭೋಜನದಲ್ಲಿರುವ ನಾಗಬನದಲ್ಲೂ ಭಾರೀ ಸಂಖ್ಯೆಯ ಭಕ್ತಾದಿಗಳು ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು. ಅಂತೆಯೇ ಉಪ್ಪಿನಂಗಡಿಯ ಪದಾಳ ಶ್ರೀ ಷಣ್ಮುಖ ದೇವಾಲಯವೂ ಸೇರಿದಂತೆ ಪರಿಸರದಾದ್ಯಂತ ನಾಗಬನಗಳಲ್ಲಿ ನಾಗಾರಾಧನೆಯು ಜರಗಿತು.