ಬೆಳ್ಳಾರೆ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ನಾಯಕ, ಸುಳ್ಯ ಯುವವಾಹಿನಿ ಮಾಜಿ ಅಧ್ಯಕ್ಷ ಪ್ರವೀಣ್ ನೆಟ್ಟಾರು ಮನೆಗೆ ಮುಲ್ಕಿ,ಬಂಟ್ವಾಳ,ಮೂಡಬಿದ್ರೆ.ಉಡುಪಿ ಜಿಲ್ಲಾ ಬಿಲ್ಲವ ಸಂಘದ ಮುಖಂಡರು ಆ.3ರಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.ಪ್ರವೀಣ್ರವರು ಕನಸು ಕಂಡಿದ್ದ ಹೊಸ ಮನೆಯನ್ನು ಸುಮಾರು 50 ಲಕ್ಷ ರೂ.ವೆಚ್ಚದಲ್ಲಿ ಬಿಲ್ಲವ ಮುಖಂಡರ ವತಿಯಿಂದ ನಿರ್ಮಿಸಿಕೊಡುವುದಾಗಿ ಈ ಸಂದರ್ಭದಲ್ಲಿ ಹೇಳಿದ ಮುಖಂಡರು ಪ್ರಥಮ ಹಂತದ ಚೆಕ್ ವಿತರಿಸಿದರು.
ಬಿಲ್ಲವ ಮುಖಂಡರಾದ ಭಾಸ್ಕರ್ ಕೋಟ್ಯಾನ್ ಇರ್ವತ್ತೂರು, ಬಿಲ್ಲವ ಬ್ರಿಗೇಡ್ ಅಧ್ಯಕ್ಷ ಸದಾನಂದ ಪೂಜಾರಿ, ಬಿಲ್ಲವ ಮುಖಂಡರಾದ ಶರತ್ಚಂದ್ರ, ಸನಿಲ್ ಬೆಂಗಳೂರು,ಗಂಗಾಧರ್ ಪೂಜಾರಿ ಪಣಿಯೂರು,ಶಂಕರ್ ಕುಂದಾರ್ ಸೂಡ,ಸೂರಜ್ ಕಲ್ಯ,ಸತೀಶ್ ಪೂಜಾರಿ ಬೋಳ,ದಿವ್ಯಶ್ರೀ ಗಿರೀಶ್ ಅಮೀನ್,ಹರೀಶ್ ಅಮೀನ್ ಗುಂಡ್ಯಡ್ಕ,ವಿಜಯ್ ಕುಮಾರ್ ಕಾರ್ಕಳ, ಸತೀಶ್,ಹರೀಶ್ ಮಣಿಯಾಲು,ಅವಿನಾಶ್ ಸುವರ್ಣ,ಕಿಶನ್ ಅಮೀನ್,ದೀಪಕ್ ಮಂಗಳಾದೇವಿ,ಪ್ರಶಾಂತ್ ಮಂಗಳಾದೇವಿ,ಸಂದೀಪ್ ಶಕ್ತಿನಗರ,ಮೋಹನ್ ದಾಸ್ ವಾಮಂಜೂರು,ಜಗದೀಶ್ ಪೂಜಾರಿ ಸಾಣೂರು,ರತ್ನಾಕರ ಅಮೀನ್,ಪ್ರಕಾಶ್ ಕಾರ್ಕಳ,ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಜಯಂತ ನಡುಬೈಲು, ಉಲ್ಲಾಸ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.