ಪುತ್ತೂರು: ಸವಣೂರು ಗ್ರಾಮ ಪಂಚಾಯತ್ ವತಿಯಿಂದ “ಓದುವ ಬೆಳಕು” ಯೋಜನೆಯನ್ವಯ ನಡೆದ ಅಂತರ್ ಶಾಲಾ ಚೆಸ್ ಸ್ಪರ್ಧೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯಕ್ಕೆ ಎರಡು ಬಹುಮಾನಗಳು ಲಭಿಸಿವೆ. 4ನೆ ತರಗತಿಯ ಯಶ್ವಿನ್ (ದಯಾನಂದ ಭಂಡಾರಿ ಮತ್ತು ರಂಜಿನಿ ಇವರ ಪುತ್ರ) ದ್ವಿತೀಯ ಸ್ಥಾನ ಮತ್ತು 5ನೆ ತರಗತಿಯ ಕೃಪಹರಿ ಎಂ. ರೈ (ಮೋಹನ್ ರೈ ಕೆರೆಕ್ಕೊಡಿ ಮತ್ತು ಚಂದ್ರಕಲಾ ಇವರ ಪುತ್ರ) ತೃತೀಯ ಸ್ಥಾನಗಳನ್ನು ಪಡೆದು ಕೊಂಡಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಮತ್ತು ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ.