ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಕಾಳಿಕಾ ಮಹಿಳಾ ಸಂಘದ ವತಿಯಿಂದ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ನೇತೃತ್ವದಲ್ಲಿ ಶ್ರೀ ವರಮಹಾಲಕ್ಷೀ ವೃತಾಚರಣೆ ನಡೆಯಿತು. ಶ್ರೀ ಕಾಳಿಕಾ ಮಹಿಳಾ ಸಂಘದ ಅಧ್ಯಕ್ಷರಾದ ಮೋಹಿನಿ ತಾರಿದಳ, ಕಾರ್ಯದರ್ಶಿ ಸುಮತಿ ಸಂಜೀವ ಪಳನೀರು, ರಘುರಾಮ ಕಾಳ್ಯಂಗಾಡು, ಸಂಕಪ್ಪ ಸುವರ್ಣ ಬಾಡೂರು ಮೊದಲಾದವರು ಉಪಸ್ಥಿತರಿದ್ದರು.