ಪುತ್ತೂರು: ಬೊಳುವಾರು ಶ್ರೀದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಕ್ಷೇತ್ರದ ಅರ್ಚಕರಾದ ವೇ.ಮೂ. ಶ್ರೀಧರ ಭಟ್ ಕಬಕರವರ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ ಅ.5ರಂದು ರಾತ್ರಿ ನಡೆಯಿತು. ಸಂಜೆ ಮಹಿಳೆಯರಿಂದ ಲಲಿತಾ ಸಹಸ್ರನಾಮಾರ್ಚನೆ, ಉಮೇಶ್ ದೇವಾಡಿಗ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಭಜನೆ ಬಳಿಕ ವರಮಹಾಲಕ್ಷ್ಮೀ ಪೂಜೆ ನಡೆದು, ರಾತ್ರಿ ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ನಡೆದು ಪ್ರಸಾದ ವಿತರಣೆ, ಫಲಾಹಾರ ನಡೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್, ಕ್ಷೇತ್ರದ ವಿಶ್ವಸ್ಥ ಮಂಡಳಿ ಸದಸ್ಯರುಗಳಾದ ವಿ.ಕೆ. ಶೆಟ್ಟಿ, ಸುಂದರ ನಾಯ್ಕ್ ಸ್ಥಳೀಯರಾದ ಪುಟ್ಟಣ್ಣ ನೈಕ್, ಬೇಬಿ ಪೂಜಾರಿ, ದಿನೇಶ್ ಕರ್ಮಲ, ಕಿರಣ್ ಉರ್ಲಾಂಡಿ, ಪುಷ್ಪರಾಜ್ ಹೆಗ್ಡೆ ಉರ್ಲಾಂಡಿ, ಮೇಖಲ ಬಿ.ಎಸ್., ಶಕುಂತಳಾ ವಿ.ಕೆ. ಶೆಟ್ಟಿ, ಪುಷ್ಪಲತಾ ಬೇಬಿ ಪೂಜಾರಿ, ಜಲಜಾಕ್ಷಿ ಹೆಗ್ಡೆ, ಶಿಲ್ಪಾ ಶಿವಪ್ರಸಾದ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.