ಪುತ್ತೂರು: ಸವಣೂರು ಯೂತ್ ಫ್ರೆಂಡ್ಸ್ ಇದರ ಮಹಾಸಭೆ ಅಧ್ಯಕ್ಷ ಯಾಕೂಬ್ ಚಡವು ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಹೈದರ್ ಎಸ್.ಆರ್ ವರದಿ ವಾಚಿಸಿದರು. ಸಭೆಯಲ್ಲಿ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಯಾಕೂಬ್ ಚಡವು, ಪ್ರ.ಕಾರ್ಯದರ್ಶಿಯಾಗಿ ಆಸಿಫ್ ಅರಫ ಆಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ಸಾಹಿತಿ ಹೈದರಾಲಿ ಐವತ್ತೊಕ್ಲು, ಉಪಾಧ್ಯಕ್ಷರಾಗಿ ಸಿದ್ದೀಕ್ ಚಾಪಳ್ಳ, ಸಲೀಂ ಯು.ಎಸ್, ಜತೆ ಕಾರ್ಯದರ್ಶಿಗಳಾಗಿ ತನ್ವೀರ್ ಕಾಯರ್ಗ ಹಾಗೂ ರಿಯಾಝ್ ಕಣಿಮಜಲು, ಕೋಶಾಧಿಕಾರಿಯಾಗಿ ಅಲಿ ಚಾಪಳ್ಳ, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದೀಕ್ ಸೋಂಪಾಡಿ, ಕ್ರೀಡಾ ಕಾರ್ಯದರ್ಶಿಗಳಾಗಿ ಶಫೀಕ್ ಶಾಂತಿನಗರ ಹಾಗೂ ರಿಯಾಝ್ ಚಡವು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೈದರ್ ಎಸ್.ಆರ್, ಜಾಫರ್ ಬಿ.ಎಂ, ಅಲ್ತಾಫ್ ಶಾಂತಿನಗರ, ನಿಝಾರ್ ಡಿ. ಆಯ್ಕೆಗೊಂಡರು. ಗೌರವ ಸಲಹೆಗಾರರಾಗಿ ಹನೀಫ್ ಎಂ.ಎಚ್, ಅಶ್ರಫ್ ಬಿ.ಎಂ, ಅಶ್ರಫ್ ಚಾಪಳ್ಳ, ರಫೀಕ್ ಟಾಸ್ಕೋ, ಅಬೂಬಕ್ಕರ್ ಹಾಜಿ ಆರ್ತಿಕೆರೆ ಆಯ್ಕೆಗೊಂಡರು. ಅಶ್ರಫ್ ಬಿ.ಎಂ.ಸ್ವಾಗತಿಸಿದರು. ಆಸಿಫ್ ಅರಫ ವಂದಿಸಿದರು.