ರೆಖ್ಯ ನಿವಾಸಿ ಲೋಕೇಶ್ ನಾಪತ್ತೆ-ಹೊಳೆಬದಿ ಬೈಕ್ ಪತ್ತೆ; ನದಿಯಲ್ಲಿ ಹುಡುಕಾಟ

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಊರ್ನಡ್ಕ ನಿವಾಸಿ ಲೋಕೇಶ್(43ವ.)ಎಂಬವರು ಆ.14ರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಇವರ ಬೈಕ್ ಉದನೆ ಸಮೀಪದ ಕಡೆಂಬಿಲ ಎಂಬಲ್ಲಿ ಗುಂಡ್ಯ ಹೊಳೆಬದಿಯ ಹೆದ್ದಾರಿಯಲ್ಲಿ ಪತ್ತೆಯಾಗಿದ್ದು ಲೋಕೇಶ್ ಅವರು ಗುಂಡ್ಯಹೊಳೆಯಲ್ಲಿ ಮುಳುಗಿರುವ ಶಂಕೆ ಹಿನ್ನೆಲೆಯಲ್ಲಿ ಆ.15ರಂದು ಹೊಳೆನೀರಿನಲ್ಲಿ ಹುಡುಕಾಟ ನಡೆಸಲಾಗಿದೆ. ಆ.14ರಂದು ಸಂಜೆ 4 ಗಂಟೆಗೆ ಲೋಕೇಶ್ ಅವರು ಅಗತ್ಯ ಸಾಮಾಗ್ರಿ ಖರೀದಿಗೆಂದು ಮನೆಯಿಂದ ತನ್ನ ಬೈಕ್(ಕೆಎ21 ವೈ 8754)ನಲ್ಲಿ ಉದನೆ ಪೇಟೆಗೆಂದು ಹೋಗಿದ್ದರು. ಲೋಕೇಶ್ ಅವರ ಅಣ್ಣ ರಾಮಚಂದ್ರ ಗೌಡರವರು ನೆಲ್ಯಾಡಿಗೆ ಹೋಗಿ … Continue reading ರೆಖ್ಯ ನಿವಾಸಿ ಲೋಕೇಶ್ ನಾಪತ್ತೆ-ಹೊಳೆಬದಿ ಬೈಕ್ ಪತ್ತೆ; ನದಿಯಲ್ಲಿ ಹುಡುಕಾಟ