ನೆಟ್ಟಣಿಗೆಮುಡ್ನೂರು ಗ್ರಾಮದ ನೂಜಿಬೈಲುವಿನಲ್ಲಿ ಕಾಡಾನೆಯಿಂದ ಕೃಷಿ ನಾಶ

0

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ನಾರಾಯಣ ರೈ ಅಂಕೊತ್ತಿಮಾರು, ಅಶೋಕ್ ಕುಮಾರ್ ರೈ ನೂಜಿಬೈಲು, ಜಯಪ್ರಕಾಶ್ ರೈ ರವರ ತೋಟಕ್ಕೆ ಜೂ.2ರಂದು ರಾತ್ರಿ ಎರಡನೇ ಬಾರಿ ಬಂದಿರುವ ಆನೆ ಕೃಷಿ ನಾಶ ಪಡಿಸಿದ್ದು, ಗ್ರಾಮದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ಅರಣ್ಯಾಧಿಕಾರಿ ಮದನ್ ರವರು ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತಲಿನ ಧೈರ್ಯ ತುಂಬಿ ಆನೆ ಸಂಚರಿಸಿದ ದಾರಿಯ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಹೆಚ್ಚಿನ ಅಪಾಯ ಸಂಭವಿಸುವ ಮೊದಲು ಇದಕ್ಕೆ ಸೂಕ್ತ ಪರಿಹಾರ ಒದಗಿಸಿ ಆನೆಯನ್ನು ಹಿಡಿದು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ರೀತಿ ಆನೆ ಹಾವಳಿಯಿಂದ ಎಷ್ಟೋ ಶ್ರಮಪಟ್ಟು ಬೆಳೆಸಿದ ಕೃಷಿ ಹಾನಿಯಾಗುತ್ತಿರುವ ಬಗ್ಗೆ ಶಾಸಕರು ಗಮನ ಹರಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.


LEAVE A REPLY

Please enter your comment!
Please enter your name here