ಗಾಯಾಳುವನ್ನು ವಾಹನದಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ ಯುವ ಕಾಂಗ್ರೆಸ್ನ ಶ್ರೀಪ್ರಸಾದ್ ಪಾಣಾಜೆ, ಫಾರೂಕ್ ಪೆರ್ನೆ
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿಯಲ್ಲಿ ಲಾರಿ ಹಾಗೂ ಜೀಪಿನ ಮಧ್ಯೆ ಅಪಘಾತ ಸಂಭವಿಸಿದ್ದು, ಜೀಪು ಚಾಲಕ ಗಾಯಗೊಂಡಿರುವ ಘಟನೆ ಜೂ.29ರಂದು ಸಂಜೆ ನಡೆದಿದೆ.
ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಸಮೀಪದ ದೇವಸ್ಯ ದಿ.ಜತ್ತಪ್ಪ ಗೌಡರ ಪುತ್ರ ಮನೋಜ್ ಗಾಯಗೊಂಡವರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಲಾರಿ ಹಾಗೂ ಎದುರಿನಿಂದ ಬಂದ ಜೀಪು ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಜೀಪು ಸಂಪೂರ್ಣ ನಜ್ಜಗುಜ್ಜಾಗಿದೆ. ಜೀಪ್ನಲ್ಲಿ ಚಾಲಕ ಮನೋಜ್ ಮಾತ್ರವೇ ಇದ್ದು ಅವರು ಗಾಯಗೊಂಡಿದ್ದಾರೆ. ಜೀಪಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕನನ್ನು ಹೊರತೆಗೆಯಲು ಸಾಹಸ ಪಡುವಂತಾಗಿತ್ತು.
ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಹಾಗೂ ಪುತ್ತೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆಯವರು ಗಾಯಾಳುವನ್ನು ಅಪಘಾತಗೊಂಡಿದ್ದ ವಾಹನದಿಂದ ಹೊರತೆಗೆದು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆತಂದು ಬೊಳುವಾರು ಪ್ರಗತಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.