ಪುತ್ತೂರು: ಆ.30 ರಂದು ಕರ್ತವ್ಯದಿಂದ ಸೇವಾ ನಿವೃತ್ತಿ ಹೊಂದಲಿರುವ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡರಿಗೆ ಕಂದಾಯ ಇಲಾಖೆಯಲ್ಲಿನ ಅವರ ಸಾರ್ಥಕ, ಪ್ರಾಮಾಣಿಕ ಸೇವೆಯನ್ನು ಗುರುತಿಸಿ ರೋಟರಿ ಕ್ಲಬ್ ಉಪ್ಪಿನಂಗಡಿ ವತಿಯಿಂದ ಅಭಿನಂದಿಸಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ. ಬಿ, ಕಾರ್ಯದರ್ಶಿ ಶ್ರೀಕಾಂತ್ ಪಟೇಲ್, ನಿಯೋಜಿತ ಅಧ್ಯಕ್ಷ ಕೇಶವ ಗೌಡ , ಸದಸ್ಯರಾದ ಮನ್ಸೂರ್, ಗ್ರಾಮ ಲೆಕ್ಕಿಗ ಶ್ರೀಮತಿ ನಮಿತ, ಸಿಬ್ಬಂದಿ ರವಿಯವರು ಉಪಸ್ಥಿತರಿದ್ದರು.