ಪುತ್ತೂರು: ಚೆನ್ನೈನ ತಿರುವತ್ತಿಯೂರಿನಲ್ಲಿ ನಡೆದ 14 ವರ್ಷದ ಒಳಗಿನ ಬಾಲಕಿಯರ ರಾಷ್ಟ್ರಮಟ್ಟದ ವಿದ್ಯಾಭಾರತಿ ಚೆಸ್ ಸ್ಪರ್ಧೆಯಲ್ಲಿ, ವಿವೇಕಾನಂದ ಸೆಂಟ್ರಲ್ ಸ್ಕೂಲಿನ 6ನೇ ತರಗತಿಯ ವಿದ್ಯಾರ್ಥಿನಿಯಾದ ಸಾನಿಧ್ಯ ಎಸ್. ರಾವ್ (ಸುದೇಶ್ ರಾವ್ ಪಿ . ಎನ್ ಮತ್ತು ಶ್ರುತಿ ಎಸ್ ರಾವ್ ದಂಪತಿ ಪುತ್ರಿ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
