ಕೌಡಿಚ್ಚಾರ್:ಇಲ್ಲಿನ ಮಾಡ್ನೂರಿನ ಯುವತಿಯನ್ನು ಮದುವೆಯಾಗಿದ್ದ ಮಂಡ್ಯ ಮೂಲದ ಯುವಕ ಅಬುಧಾಬಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.
ಉದ್ಯೋಗ ನಿಮಿತ್ತ ಕೆಲ ದಿನಗಳ ಹಿಂದೆಯಷ್ಟೆ ಅಬುಧಾಬಿಗೆ ತೆರಳಿದ್ದ, ಮಾಡ್ನೂರು ಗ್ರಾಮದ ನಡುವಡ್ಕ ಮಹಮ್ಮದ್ ಕುಂಞಿ ಎಂಬವರ ಮಗಳು ಬುಶ್ರಾ ಅವರ ಪತಿ ಮಂಡ್ಯ ತಾಲೂಕಿನ ಗೂಬೆಹಳ್ಳದ ನಿವಾಸಿಯಾಗಿದ್ದ ಅಬೂಬಕ್ಕರ್(32ವ.)ಮೃತಪಟ್ಟವರು.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.ಅಬೂಬಕ್ಕರ್ ಅವರ ಮೃತದೇಹವನ್ನು ಮಂಡ್ಯಕ್ಕೆ ತರುವ ಕಾರ್ಯದಲ್ಲಿ ಎಸ್ಕೆಎಸ್ಎಸ್ಎಫ್ ಅಬುಧಾಬಿ ಕರ್ನಾಟಕ ಸಮಿತಿಯವರು ಸಹಕಾರ ನೀಡಿದ್ದರು.