ಕಾವು: ಇಂಪ್ಯಾಕ್ಟ್ ಆರ್ಟ್ಸ್ ಆಂಡ್ ಸ್ಪೋಟ್ಸ್ ಕರಾಟೆ ಅಕಾಡೆಮಿ ವತಿಯಿಂದ ಸುಳ್ಯ ಕುರುಂಜಿ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ಷಿಪ್ನಲ್ಲಿ ಈಶ್ವರಮಂಗಲ ಗಜಾನನ ಶಾಲೆಯ ವಿದ್ಯಾರ್ಥಿ ನಿತಿನ್ ಬಿ. ರವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ನಿತಿನ್ ಬಿ. ರವರು ಮಾಡ್ನೂರು ಗ್ರಾಮದ ಕಾವು ನನ್ಯ ಸುಧೀಶ್ ಬೋರ್ಕರ್ ಮತ್ತು ಪ್ರಪುಲ್ಲ ದಂಪತಿಗಳ ಪುತ್ರನಾಗಿದ್ದು, ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ ಮಳಿರವರು ತರಬೇತಿ ನೀಡಿರುತ್ತಾರೆ.
