ಬಂದಾರು: ಪುತ್ತೂರು ತಾಲೂಕಿನ ನೆಲ್ಯಾಡಿಯಲ್ಲಿ ನಡೆದ 14 ನೇ ವಯೋಮಾನದ ಪ್ರಾಥಮಿಕ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ್ದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿಯ ಬಾಲಕಿಯರ ತಂಡ ಸತತ 12ನೇ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ವನ್ನು ಪಡೆದು ವಿಭಾಗಿಯ ಮಟ್ಟಕ್ಕೆ ಅಯ್ಕೆಗೊಂಡಿದ್ದು ತಂಡದ ನಾಯಕಿ ಕು.ಶ್ರಾವ್ಯ ಉತ್ತಮ ಅಲ್ ರೌಂಡರ್ ಆಗಿ ಕು.ತನುಶ್ರೀ ಉತ್ತಮ ಹೊಡೆತಗಾರ್ತಿಯಾಗಿ ಹಾಗೂ ಕು.ಸಿಂಚನ ಉತ್ತಮ ಸೆಟ್ಟರ್ ರಾಗಿ ಆಯ್ಕೆಯಾಗಿದ್ದಾರೆ.
ಮುಖ್ಯೋಪಾಧ್ಯಾಯರಾದ ಶ್ರೀಯುತ ಮಂಜನಾಯ್ಕ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಶಿಕ್ಷಕ ವರ್ಗದವರು ವೀಜೆತ ಕ್ರೀಡಾಪಟುಗಳನ್ನು ಅಭಿನಂದಿಸಿದರು. ವೀಜೆತ ಕ್ರೀಡಾಪಟುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಯುತ ಪ್ರಶಾಂತ್ ಇವರು ತರಬೇತಿ ನೀಡಿರುತ್ತಾರೆ.