ಬೆಳ್ತಂಗಡಿ : ಬೆಳ್ತಂಗಡಿಯ ಸೋಜ ಎಲೆಕ್ಟ್ರಾನಿಕ್ ಸಂಸ್ಥೆಯ ಮುಂಭಾಗ ಬಸ್ಸು ಸ್ಕೂಟಿ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಸೆ.27 ರಂದು ಮಧ್ಯಾಹ್ನ ನಡೆಯಿತು.
ಸ್ಕೂಟಿ ಸವಾರ ನ್ಯಾಯತರ್ಪು ಗ್ರಾಮದ ಕೊರಜ್ಜಂಡ ನಿವಾಸಿ ಕೂಲಿ ಕಾರ್ಮಿಕ ಉಮೇಶ್.
ಸ್ಕೂಟಿ ಸವಾರ ಬೆಳ್ತಂಗಡಿ ಯಿಂದ ಗುರುವಾಯನಕೆರೆ ಕಡೆಗೆ ಪ್ರಯಾಣಿಸುವಾಗ ಗುರುವಾಯನಕೆರೆ ಕಡೆಯಿಂದ ಬಸ್ ಬಸ್ ನಿಲ್ದಾಣಕ್ಕೆ ಬರುತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಬೇರೊಂದು ಬಸ್ಸುನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟಿ ಸವಾರ ನಿಗೆ ಡಿಕ್ಕಿ ಹೊಡೆದು, ಕೈ,ಕಾಲು ಮುಖಕ್ಕೆ ಗಂಭೀರ ಗಾಯವಾಗಿದೆ. ಸ್ಥಳೀಯರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಹಿತಿ ತಿಳಿದ ಬೆಳ್ತಂಗಡಿ ಟ್ರಾಫಿಕ್ ಪೋಲಿಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕೇಸು ದಾಖಲಿಸಿದ್ದಾರೆ.