ತೋಟತ್ತಾಡಿ: ಶ್ರೀ ಸೋಮನಾಥೇಶ್ವರ ಭಜನಾ ತಂಡ ಬೈಲಂಗಡಿ ತೋಟತ್ತಾಡಿ ಇದರ ವತಿಯಿಂದ ಕೊಡಗು ಜಿಲ್ಲೆಯ ವಿವಿಧ ಧಾರ್ಮಿಕ ಸ್ಥಳಗಳಿಗೆ ಒಂದು ದಿನದ ಪ್ರವಾಸ ಮಾಡಲಾಯಿತು.
ಪ್ರವಾಸದ ಉಸ್ತುವಾರಿಯನ್ನು ದಿವಾಕರ ಪೂಜಾರಿ ಕಳೆoಜೊಟ್ಟು ‘ ಸನತ್ ಕುಮಾರ್ ಮೂರ್ಜೆ, ವಿಜಯ ಗೌಡ ಅಗರಿ, ಜಯಂತ ಗೌಡ ಪರಾರಿ ವಹಿಸಿದರು.
ಪ್ರವಾಸದಲ್ಲಿ ಭಜನಾ ತಂಡದ ಉಸ್ತುವಾರಿಗಳಾದ ದಿನೇಶ್ ನಾಯ್ಕ್ ಕೋಟೆ, ಸತೀಶ್ ಪೂಜಾರಿ ಮೂರ್ಜೆ, ಸತೀಶ್ ಗೌಡ ಉಬರಬೈಲು, ಶಿವಪ್ರಸಾದ್ ಬಳ್ಳಿ ಹಾಗೂ ಭಜನಾ ತಂಡದ ಸದಸ್ಯರ ಹೆತ್ತವರು ಉಪಸ್ಥಿತರಿದ್ದರು. ಭಜನಾ ತಂಡದ 21ಜನ ಸದಸ್ಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು.