ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ .ಟ್ರಸ್ಟ್ (ರಿ) ಗುರುವಾಯನಕೆರೆ ಮಡಂತ್ಯಾರ್ ವಲಯದ ಮಡಂತ್ಯಾರ್ ಶ್ರೀ ಗಣಪತಿ ಮಂಟಪದಲ್ಲಿ ಲಕ್ಷ ದೀಪೋತ್ಸವದ ಪ್ರಯುಕ್ತ 10ನೇ ವರ್ಷದ ಪಾದಯಾತ್ರೆ ಪೂರ್ವ ತಯಾರಿ ಸಭೆಯನ್ನು ನಡೆಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷರು ಜಯಂತ್ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುಷ್ಪರಾಜ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಮಡಂತ್ಯಾರ್ ವಲಯದಿಂದ 1200 ಮಂದಿ ಪಾದಯಾತ್ರೆಗೆ ಭಾಗವಹಿಸುತ್ತಾರೆ ಎಂದು ಹೇಳಿದರು. ತಾಲೂಕಿನ ಯೋಜನಾಧಿಕಾರಿ ಯಶವಂತ್.ಎಸ್ ಮಾತಾನಾಡಿ ಪಾದಯಾತ್ರೆ ಬಗ್ಗೆ ಮಾಹಿತಿ ನೀಡಿದರು.
ಪಾರೆಂಕಿ ದೇವಸ್ಥಾನದ ಅರ್ಚಕರು ಶ್ರೀಧರ ಭಟ್, ವಲಯದ ಅಧ್ಯಕ್ಷ ರು ಸತೀಶ್ ಆಚಾರ್ಯ, ಮಡಂತ್ಯಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಸಂಗೀತ ಶೆಟ್ಟಿ, ಮಹಾವೀರ ಮೆಡಿಕಲ್ ಮಾಲಕರು ಉದಯಕುಮಾರ್ ಜೈನ್, ತಾಲೂಕು ಜನಜಾಗೃತಿ ಸದಸ್ಯರಾದ ಪದ್ಮನಾಭ ಸಾಲ್ಯಾನ್ ಮತ್ತು ಪದ್ಮನಾಭ ಆಟಲಾ ಹಾಗೂ ತುಳಸಿ ಹಾರಬೆ, ರತ್ನಕರ ಶೆಟ್ಟಿ ಹಂಸರಾಜ್ ಬುಣ್ಣು , ನೃಪರಾಜ್ ಬಂಗೇರ, ಪದ್ಮನಾಭ ಅರ್ಕಜೆ, ಮೇಲ್ವಿಚಾರಕರು ಶೇಖರ್, ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು,ಪದಾಧಿಕಾರಿಗಳು,ಗ್ರಾಮ ಸಮಿತಿ ಅಧ್ಯಕ್ಷರು,ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಮಡಂತ್ಯಾರ್ ವಲಯದ ಮೇಲ್ವಿಚಾರಕ ವಸಂತ ಕುಮಾರ್ ಮಾಡಿದರು. ಪಾರೆಂಕಿ ವಿಭಾಗದ ಸೇವಾಪ್ರತಿನಿಧಿ ಶೋಭಾರವರು ಧನ್ಯವಾದಗೈದರು.