ನಿಡ್ಲೆ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನ.22ರಂದು ಸಂತೋಷನಗರದಲ್ಲಿ ಸಂಭವಿಸಿದೆ.
ಕಾರು ಸಿಮೆಂಟ್ ಕಟ್ಟೆಗೆ ಗುದ್ದಿದ ಪರಿಣಾಮ ಅಲ್ಲೇ ಇದ್ದ ಅಂಗಡಿಯ ಬೋರ್ಡ್ ಹಾಗೂ ಶೀಟ್ ಗೆ ಹಾನಿಯಾಗಿದ್ದು, ಪಲ್ಟಿಯಾದ ಕಾರು ಸಂಪೂರ್ಣ ಜಖಂಗೊಂಡಿದೆ. ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಯಾಣಿಕರು ಪಾರಾಗಿದ್ದಾರೆ.