ಪುತ್ತೂರು: ಮೇ 20 ರ ರಾತ್ರಿ ಸುರಿದ ಭಾರಿ ಮಳೆಗೆ ಪಡ್ನೂರು ಗ್ರಾಮದ ನೆಲಪ್ಪಾಲು ಎಂಬಲ್ಲಿ ದನದ ಹಟ್ಟಿಯ ಗೋಡೆ ಕುಸಿದು ಹಸು, ಕರು ಮೃತಪಟ್ಟ ಬಗ್ಗೆ ವರದಿಯಾಗಿದೆ.
![](https://puttur.suddinews.com/wp-content/uploads/2024/05/40455fef-570c-482c-a092-2cb66ae61adf.jpg)
ಪಡ್ನೂರು ಗ್ರಾಮದ ನೆಲಪ್ಪಾಲು ವಸಂತ ಎಂಬವರ ಮನೆಯ ಸಮೀಪದ ಹಟ್ಟಿಯ ಗೋಡೆ ಮಳೆಗೆ ಬಿದ್ದು ಹಟ್ಟಿಯಲ್ಲಿದ್ದ ಹಸುಗಳ ಪೈಕಿ ಒಂದು ಹಸು ಮತ್ತು ಕರು ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಪುತ್ತೂರು ತಹಸೀಲ್ದಾರ್ ಕುಂಞಿ ಅಹಮ್ಮದ್ ಮತ್ತು ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರು ಅವರು ಭೇಟಿ ನೀಡಿದ್ದಾರೆ. ನಗರಸಭಾ ಸದಸ್ಯ ಕೆ ಜೀವಂಧರ್ ಜೈನ್ ಕೂಡಾ ಭೇಟಿ ನೀಡಿದ್ದಾರೆಂದು ತಿಳಿದು ಬಂದಿದೆ