ಪುತ್ತೂರು : ಬೆಳ್ಳಾರೆಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗೋವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ಳಾರೆ ಮತ್ತು ಹಿಂದೂ ಜಾಗರಣ ವೇದಿಕೆ ಪೆರ್ಲಂಪಾಡಿ ಇದರ ಸದಸ್ಯರು ರಕ್ಷಿಸಿದರು.
ಈ ಗೋವಿನ ಕಾಲಿಗೆ ಪೆಟ್ಟಾಗಿದ್ದು ಬೆಳ್ಳಾರೆಯಿಂದ ಪೆರ್ಲಂಪಾಡಿ ಪಶು ವೈದ್ಯಕೀಯ ಆಸ್ಪತ್ರೆಗೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಪೆರ್ಲಂಪಾಡಿ ಪಶು ವೈದ್ಯಕೀಯ ಆಸ್ಪತ್ರೆಯ ಡಾ.ಪುನೀತ್ ಸಹಕರಿಸಿದರು.