ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ನಿಧನ

0

ಪುತ್ತೂರು: ಎಲ್ಲಾ ರೀತಿಯ ವೇಷಗಳನ್ನು ನಿರ್ವಹಿಸಬಲ್ಲ ಆಲ್ ರೌಂಡರ್ ಕಲಾವಿದನಾಗಿ ಸುಧೀರ್ಘ ಸಮಯ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದ ಗಂಗಾಧರ ಪುತ್ತೂರು ಅವರು ಮೇ 1 ರ ರಾತ್ರಿ ಹೃದಯಾಘಾತದಿಂದ ನಿಧನರಾದರು.


ಪುತ್ತೂರು ಸೇಡಿಯಾಪು ಸಮೀಪ ವಾಸ್ತವ್ಯ ಹೊಂದಿರುವ ಅವರು ಸುಮಾರು 42 ವರ್ಷಗಳಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಕಲಾ ಮಂಡಳಿಯಲ್ಲೆ ವ್ಯವಸಾಯ ಮಾಡುತ್ತಿದ್ದರು. ಆರಂಭದಲ್ಲಿ ಸ್ತ್ರೀ ಪಾತ್ರದಲ್ಲಿ ಕಾಣಿಸುತ್ತಿದ್ದ ಅವರು ಮತ್ತೆ ಎಲ್ಲಾ ವೇಷಗಳನ್ನು ನಿರ್ವಹಿಸಿದ್ದರು. ಮೇ 1 ರ ರಾತ್ರಿ ಯಕ್ಷಗಾನ ಬಯಲಾಟದಲ್ಲಿ ಕುಕ್ಕಿತ್ತಾಯನ ವೇಷ ಮಾಡಿ ಬಣ್ಣ ತೆಗೆಯುತ್ತಿದ್ದಂತೆ ಹೃದಯಾಘಾತವಾಗಿ ಮೃತರಾದರು. ಮೃತರು ಪತ್ನಿ ಆರೋಗ್ಯ ಸಹಾಯಕಿ ಮತ್ತು ಪುತ್ರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here