ಅಲೆಕ್ಕಾಡಿ : ವೀಲ್ ಚೇರ್ ಹಸ್ತಾಂತರ

0

 

ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಸುಳ್ಯ ಇದರ ನಿಂತಿಕಲ್ಲು ವಲಯದ ಮುರುಳ್ಯ ಒಕ್ಕೂಟದ ಅಲೆಕ್ಕಾಡಿ ಮಾತೃಶ್ರೀ ಸಂಘದ ಹಿರಿಯ ಸದಸ್ಯೆ ಶ್ರೀಮತಿ ಜಾನಕಿ ಅಲೆಕ್ಕಾಡಿ ಅವರು ಅನಾರೋಗ್ಯದಿಂದ ನಡೆದಾಡಲು ಅಶಕ್ತರಾಗಿದ್ದು, ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧರ್ಮಸ್ಥಳದಿಂದ ನೀಡಲಾದ ವೀಲ್ ಚೇರನ್ನು ಸೆ. 8ರಂದು ಅವರ ಮನೆಯಲ್ಲಿ ಹಸ್ತಾಂತರಿಸಲಾಯಿತು.

 

ಈ ಸಂದರ್ಭದಲ್ಲಿ ಯೋಜನಾಧಿಕಾರಿ ನಾಗೇಶ್ ಪಿ, ನಿಂತಿಕಲ್ಲು ವಲಯದ ಮೇಲ್ವಿಚಾರಕಿ ಶ್ರೀಮತಿ ಉಷಾ ಕಲ್ಯಾಣಿ ಕೆ., ಮುರುಳ್ಯ ಸೇವಾ ಪ್ರತಿನಿಧಿ ಶ್ರೀಮತಿ ಶಶಿಕಲಾ ಮುರುಳ್ಯ, ಒಕ್ಕೂಟದ ಅಧ್ಯಕ್ಷ ಪದ್ಮನಾಭ ಗೌಡ ಪುದೆ, ಅಲೆಕ್ಕಾಡಿ ಒಕ್ಕೂಟ ಅಧ್ಯಕ್ಷ ಸೂರಪ್ಪ ಗೌಡ, ಸದಸ್ಯರಾದ ಸಾಯಿಪ್ರಸಾದ್ ಬೊಳ್ಕಜೆ ಮತ್ತು ವಸಂತಿ, ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ, ಶೋಭಾ ಎಸ್.ಸಾಲಿಯಾನ್ ಸೃಜನ್ ಎಸ್ ಸಾಲಿಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here