ನಿಂತಿಕಲ್ಲು : ಶ್ರೀ ದುರ್ಗಾಂಬಾ ಸ್ವ ಸಹಾಯ ತಂಡ ಉದ್ಘಾಟನೆ

0

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ನಿಂತಿಕಲ್ಲು ವಲಯದ ಕಲ್ಮಡ್ಕ ಒಕ್ಕೂಟಕ್ಕೆ ಸಂಬಂಧಪಟ್ಟಂತೆ ಸೆ. 18ರಂದು ಶ್ರೀ ದುರ್ಗಾಂಬಾ ಪ್ರಗತಿ ಬಂಧು ತಂಡವನ್ನು ಒಕ್ಕೂಟದ ಅಧ್ಯಕ್ಷರಾದ ರಮೇಶ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯದ ಮೇಲ್ವಿಚಾರಕರಾದ ಉಷಾ ಕಲ್ಯಾಣಿ ತಂಡಗಳ ನಿಯಮಗಳ ಬಗ್ಗೆ ತಿಳಿಸಿದರು. ಒಕ್ಕೂಟದ ಕೋಶಾಧಿಕಾರಿಯದ ಲೀಲೇಶ್ ಹೊಸ ಸಂಘಕ್ಕೆ ದಾಖಲಾತಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಸವಿತಾ, ಉಪಾಧ್ಯಕ್ಷ ಪರಮೇಶ್ವರ, ಒಕ್ಕೂಟದ ಸದಸ್ಯರಾದ ಪದ್ಮನಾಭ, ಹೊಸ ತಂಡದ ಸದಸ್ಯರಾದ ನಾಗೇಶ್, ಪುನೀತ್, ಮಾಧವ, ವೇಣುಗೋಪಾಲ, ಜಯಕರ ಉಪಸ್ಥಿತರಿದ್ದರು.ಸೇವಾ ಪ್ರತಿನಿಧಿ ರತ್ನಾವತಿ ವಂದಿಸಿದರು.

LEAVE A REPLY

Please enter your comment!
Please enter your name here