ಪುತ್ತೂರು: ಎ.17ರಂದು ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದ ಅಂಗವಾಗಿ ಎ.೧೬ರ ಸಂಜೆ ಯಮುನಾ ಬೋರ್ವೆಲ್ಸ್ ನೇತೃತ್ವದಲ್ಲಿ ರಥ ಬೀದಿಯನ್ನು ಶುಚಿತ್ವಗೊಳಿಸಲಾಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಯಮುನಾ ಬೋರ್ವೆಲ್ಸ್ನ ಮಾಲಕಿ ದಿವ್ಯ ಕೆ.ಶೆಟ್ಟಿ, ಕಾವ್ಯ ಶೆಟ್ಟಿ, ಮೇನೇಜರ್ ಪ್ರವೀಣ್ ಮತ್ತು ನೌಕರರು, ಶಿವಪ್ಪ ಬಲ್ನಾಡು ಸುಂಕಮೂಲೆ, ಯೋಗಕೇಂದ್ರದ ಅಧ್ಯಕ್ಷ ಶ್ರೀಗಿರೀಶ್ ಮಳಿ, ಮಂಜುಳಾ ಗಿರೀಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.