ವಿಟ್ಲ: ಮಾಣಿ ಗ್ರಾಮದ ಬದಿಗುಡ್ಡೆ-ವಾರಾಟ ಮಾಡದಲ್ಲಿ ಏ.28ರಂದು ನಡೆಯಲಿರುವ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ವಲಸರಿ ನೇಮದ ಪ್ರಯುಕ್ತ ಗೊನೆಮುಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಅರ್ಚಕರಾದ ಅನಂತ ಭಟ್, ಪ್ರಮುಖರಾದ ಜಗನ್ನಾಥ ಚೌಟ ಬದಿಗುಡ್ಡೆ, ಮಹಾಬಲ ಶೆಟ್ಟಿ ವಾರಾಟ, ರಾಜೀವ ಶೆಟ್ಟಿ ವಾರಾಟ, ರಘುರಾಮ ಶೆಟ್ಟಿ ಸಾಗು, ರಾಜೇಶ್ ಶೆಟ್ಟಿ ಬದಿಗುಡ್ಡೆ, ಸದಾಶಿವ ಶೆಟ್ಟಿ ಶಂಭುಗ, ಲೋಕೇಶ್ ಪೂಜಾರಿ ಪಲ್ಲತ್ತಿಲ, ಗೋಪಾಲ ಮೂಲ್ಯ ನೆಲ್ಲಿ, ಸುಧೀರ್ ಶಂಭುಗ ಮೊದಲಾದವರು ಉಪಸ್ಥಿತರಿದ್ದರು.
ಏ.28ರಂದು ಬೆಳಿಗ್ಗೆ ಗಂಟೆ 10ಕ್ಕೆ ಮಾಣಿಗುತ್ತು ಚಾವಡಿಯಿಂದ ಭಂಡಾರ ಹೊರಟು, ಮಧ್ಯಾಹ್ನ ಗಂಟೆ 12ಕ್ಕೆ ಶ್ರೀ ದೈವಗಳಿಗೆ ತಂಬಿಲ, ಬಳಿಕ ಅನ್ನಸಂತರ್ಪಣೆ ಜರಗಲಿರುವುದು. ರಾತ್ರಿ ಗಂಟೆ 8ರಿಂದ ಶ್ರೀ ದೈವಗಳ ವಲಸರಿ ನೇಮ ಆರಂಭವಾಗಲಿದೆ ಎಂದು ಮಾಣಿಗುತ್ತು ಸಚಿನ್ ರೈರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.