ಪುತ್ತೂರು: ಅರಿಯಡ್ಕ ಗ್ರಾಮದ ಕೊಂಬರಡ್ಕ ಕರ್ಕೇರ ಕುಟುಂಬ ತರವಾಡು ದೈವಸ್ಥಾನದಲ್ಲಿ ನಡೆಯುವ ನೇಮೋತ್ಸವದ ಪ್ರಯುಕ್ತ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕೊಂಬರಡ್ಕದಿಂದ ಕೊಲ್ಲಾಜೆ ವರೆಗೆ ದಾರಿ ಬದಿಯಲ್ಲಿದ್ದ ಕಸ, ಪ್ಲಾಸ್ಟಿಕ್ಗಳನ್ನು ಹೆಕ್ಕಿ, ಪೊದೆ ಗಿಡಗಂಟಿಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು. ಸಂಘಟನೆ ಅಧ್ಯಕ್ಷ ಅಧ್ಯಕ್ಷ ಉದಯ್ ಸ್ವಾಮೀನಗರ, ಸಂಘಟನ ಕಾರ್ಯದರ್ಶಿ ರಾಜೇಶ್ ಕೆ ಮಯೂರ, ಕೋಶಾಧಿಕಾರಿ ಗುರುಪ್ರಸಾದ್ ಮಜ್ಜಾರ್, ಸಾಂಸ್ಕೃತಿಕ ಉಪ ಕಾರ್ಯದರ್ಶಿ ಪ್ರತೀಕ್ ಗೋಳ್ತೀಲ, ಕ್ರೀಡಾ ಕಾರ್ಯದರ್ಶಿ ಗೌತಮ್ ಕೋಡಿಯಡ್ಕ, ಕ್ರೀಡಾ ಉಪ ಕಾರ್ಯದರ್ಶಿ ನವೀನ್ ಮಜ್ಜಾರ್, ಸದಸ್ಯರಾದ ಸಮಿತ್ ಮಜ್ಜಾರ್, ಚೇತನ್ ಮಜ್ಜಾರ್, ಜಗದೀಶ್ ಕೋಡಿಯಡ್ಕ, ಮಂಜು, ಭುವನ್ ಮಜ್ಜಾರ್, ಭವಿತ್ ಸ್ವಾಮೀನಗರ, ಹೇಮಚಂದ್ರ ಕೋಡಿಯಡ್ಕ, ಸುಜನ್ ಮಜ್ಜಾರ್, ಆದ್ಯ ಆರ್ ಜೆ, ಗೋಳ್ತೀಲರವರುಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.