ಪುತ್ತೂರು : ಇತ್ತೀಚಿಗೆ ನಿಧನರಾದ ವಿಟ್ಲ ಘಟಕದ ಗೃಹರಕ್ಷಕ ಪ್ರಕಾಶ್ರವರ ಪತ್ನಿ ಸೌಮ್ಯರವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರುರವರು ವಿಟ್ಲ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೃಹರಕ್ಷಕದಳದ ಕ್ಷೇಮಾಭಿವೃದ್ಧಿ ನಿಧಿಯಿಂದ ರೂ.೧೫,೦೦೦ ಧನಸಹಾಯ ಚೆಕ್ ನೀಡಿದರು. ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿ ಸಂಜೀವ, ದಿ.ಪ್ರಕಾಶ್ರವರ ಅಣ್ಣ ಸದಾಶಿವ, ಹಿರಿಯ ಗೃಹರಕ್ಷಕ ಜಾನ್ ಲೂವೀಸ್, ಉಮೇಶ್, ಜಯಂತ್ ನಾಯಕ್, ಪುರಂದರ, ದೀಪಕ್, ಮಂಜುನಾಥ್ ಉಪಸ್ಥಿತರಿದ್ದರು.