ಪುತ್ತೂರು: ಭಾರತೀಯ ಮಜ್ದೂರ್ ಸಂಘದ ಸಂಸ್ಥೆಯಾಗಿರುವ ಭಾರತೀಯ ಪೋರ್ಟ್ ಮತ್ತು ಡಾಕ್ ಮಜ್ದೂರ್ ಮಹಾಸಂಘದ ನೂತನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನವ ಮಂಗಳೂರು ಬಂದರಿನ ಬಿ. ಎಮ್. ಎಸ್. ಕಾರ್ಯಧ್ಯಕ್ಷ ರಮೇಶ್ ಭಂಡಾರಿ ಬೊಟ್ಯಾಡಿ ಅವರು ಆಯ್ಕೆಗೊಂಡಿದ್ದಾರೆ.
ಮುಂಬೈನ ಜವಾಹರಲಾಲ್ ನೆಹರು ಪೋರ್ಟ್ ಆವರಣದಲ್ಲಿ ಏ.30 ರಿಂದ ಮೇ 1ತನಕ ನಡೆದ ಪೋರ್ಟ್ ಮತ್ತು ಡಾಕ್ ಮಜ್ದೂರ್ ಮಹಾಸಂಘದ ತ್ರೈವಾರ್ಷಿಕ ಸಮ್ಮೇಳನದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸಮ್ಮೇಳನದ ಅಧ್ಯಕ್ಷ ಭವಾನಿ ಶಂಕರ್ ಡು, ಬಿ. ಎಮ್. ಎಸ್. ರಾಷ್ಟ್ರೀಯ ಉಪಾಧ್ಯಕ್ಷ ಜಗದೀಶ್ವರ್ ರಾವ್, ಪೋರ್ಟ್ ಫೆಡರೇಷನ್ ಪ್ರಭಾರಿ ಚಂದ್ರಕಾಂತ್ ಧುಮಲ್ ಮತ್ತು ದೇಶದ 9 ಪೋರ್ಟನ ಬಿ. ಎಮ್. ಎಸ್ ಪದಾಧಿಕಾರಿಗಳು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಈ ಆಯ್ಕೆ ನಡೆದಿದೆ. ಬೊಟ್ಯಾಡಿ ದಿ. ತಿಮ್ಮಪ್ಪ ಭಂಡಾರಿ ಅವರ ಪುತ್ರ ರಮೇಶ್ ಭಂಡಾರಿ ಅವರು ಮುಂಡೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ ಅವರ ಸಹೋದರಾಗಿದ್ದು, ಮಂಗಳೂರಿನಲ್ಲಿ ನವ ಮಂಗಳೂರು ಬಂದರು ಟ್ರಸ್ಟ್ (ಎನ್ಎಂಪಿಟಿ)ಯಲ್ಲಿ ಉದ್ಯೋಗಿಯಾಗಿದ್ದಾರೆ.