ವಿಟ್ಲ: ಬಂಟ್ವಾಳ ತಾಲೂಕು ಕುಳ ವಿಟ್ಲಮುಡ್ನೂರು ಗ್ರಾಮದ ಪೆಲತ್ತಿಂಜದಲ್ಲಿ ಪುನರ್ ನಿರ್ಮಾಣಗೊಂಡ ಶಿರಾಡಿ ದೈವಸ್ಥಾನದಲ್ಲಿ ಮೇ.5ರಿಂದ ಮೇ.7ರ ವರೆಗೆ ನಡೆಯಲಿರುವ 48 ಕಲಶಾಭಿಷೇಕ ಮತ್ತು ಶಿರಾಡಿ ದೈವದ ಮಂಚಬಿಂಬ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವದ ಪ್ರಥಮ ದಿನವಾದ ಮೇ.೫ರಂದು ಸಾಯಂಕಾಲ ಪ್ರಾರ್ಥನೆ, ಸ್ಥಳಶುದ್ಧಿ, ಸ್ವಸ್ತಿಪುಣ್ಯಾಹ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬಾಧಿವಾಸ ನಡೆಯಿತು.
ಎರಡನೇ ದಿನವಾದ ಮೇ.೬ರಂದು ಬೆಳಗ್ಗೆ ಗಣಪತಿಹವನ, ಕಲಶಪೂಜೆ, ಮಂಚಬಿಂಬ ಪ್ರತಿಷ್ಠಾ ಕಾರ್ಯಕ್ರಮ, ಕಲಶಾಭಿಷೇಕ, ತಂಬಿಲ, ಮದ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಮೇ.೭ರಂದು ಬೆಳಗ್ಗೆ ದೈವದ ನೇಮೋತ್ಸವ ನಡೆಯಲಿದೆ.