ಪುತ್ತೂರು: ನಿಡ್ಪಳ್ಳಿ ಹೊಸಮನೆ ಮುತ್ತಪ್ಪ ಪೂಜಾರಿ ಮತ್ತು ದೇವಕಿ ದಂಪತಿಯ ವೈವಾಹಿಕ ಜೀವನದ ಸುವರ್ಣ ಸಂಭ್ರಮ ಕಾರ್ಯಕ್ರಮ ಮೇ 14 ರಂದು ನಿಡ್ಪಳ್ಳಿ ಹೊಸಮನೆಯಲ್ಲಿ ನಡೆಯಿತು. ಶುಭ ಹಾರೈಸಿದ ಭಾಸ್ಕರ ಕರ್ಕೇರ ನುಳಿಯಾಲುರವರು ಮಾತನಾಡಿ ‘ಕುಟುಂಬದ ಹಿರಿಯರಾಗಿ ಅವರ ನಡೆ ನುಡಿಗಳು ನಮಗೆ ಆದರ್ಶ. ನೂರಾರು ವರ್ಷ ಬಾಳಿ ಬದುಕುವ ಅಯುರಾರೋಗ್ಯ ಸುಖ ಶಾಂತಿ ಸಮೃದ್ದಿಯನ್ನು ದೇವರು ಅವರಿಗೆ ದಯಪಾಲಿಸಲಿ’ ಎಂದರು. ಲಲಿತ, ನಾರಾಯಣ ಪೂಜಾರಿ ಪೆರ್ಲ, ಸುಗಂಧಿ ಬಾಸ್ಕರ ಕರ್ಕೇರ, ಹರೀಶ್ ಕುಮಾರ್ ಹೊಸಮನೆ, ಗಾಯತ್ರಿ ಪ್ರಮೀಳ, ಜಯಂತ ಪೂಜಾರಿ, ಪ್ರಸಾದ್ ಕುಮಾರ್ ಹೊಸಮನೆ , ಮೊಮ್ಮಕ್ಕಳು, ಬಂಧು ಮಿತ್ರರು ಹಿರಿಯ ದಂಪತಿಗೆ ಶುಭ ಹಾರೈಸಿದರು.
error: Content is protected !!