ಈಶ್ವರಮಂಗಲ: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗೆ ಪಟ್ಟೆ ಪ್ರತಿಭಾ ಪ್ರೌಢಶಾಲೆಯ 38 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲಾ ಉತ್ತೀರ್ಣರಾಗಿ ಸಂಸ್ಥೆಗೆ 100% ಫಲಿತಾಂಶ ಬಂದಿರುತ್ತದೆ. 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 77 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಗಂಗಾಧರ ಗೌಡ ಮತ್ತು ಪವಿತ್ರಕಲಾ ಇವರ ಪುತ್ರ ಹಸ್ತಿಕ್(621), ತಿಮ್ಮಪ್ಪ ಕೆ. ಮತ್ತು ಪ್ರೇಮಾ ಇವರ ಪುತ್ರಿ ಅಂಕಿತಾ ಕೆ.(614), ರತ್ನಾವತಿ ಇವರ ಪುತ್ರಿ ಸಾಕ್ಷಿ ಸಿ.ಹೆಚ್.(613), ದಿ. ವಿಠಲ್ ಶೆಟ್ಟಿ ಮತ್ತು ಗೀತಾರವರ ಪುತ್ರಿ ಹಿತಶ್ರೀ ಟಿ.(596), ಅಬ್ದುಲ್ ಕುಂಞ ಎಂ. ಮತು ಸುಮಯ್ಯ ಇವರ ಪುತ್ರಿ ಸುಹೈಲತ್ ಶೈಮಾ, ಸದಾನಂದ ರೈ ಎ. ಮತ್ತು ಸವಿತಾ ಇವರ ಪುತ್ರಿ ಸಾಕ್ಷಿ ರೈ ಎ.(571), ಎಸ್. ಜಯಾನಂದ ನಾಯ್ಕ ಮತ್ತು ಜಿ. ಉದಯ ಕುಮಾರಿ ಇವರ ಪುತ್ರಿ ಮೇಘನಾ ಎ.(559), ದೇವಿಪ್ರಸಾದ ಮತ್ತು ದಮಯಂತಿ ಇವರ ಪುತ್ರಿ ಚೈತ್ರಾ ಕೆ. (526), ಆಂತೋಣಿ ಡಿ’ಸೋಜಾ ಮತ್ತು ಎವೆಲಿನ್ ಟೆಲಿಸ್ ಇವರ ಪುತ್ರಿ ಡೀನಾ ಮರಿಯಾ ಡಿ’ಸೋಜಾ(521), ಚನಿಯಪ್ಪ ಮತ್ತು ಪ್ರೇಮಾ ಇವರ ಪುತ್ರ ಕೀರ್ತನ್ (517), ಸುಧಾಕರ ರೈ ಮತ್ತು ಮಲ್ಲಿಕಾ ಇವರ ಪುತ್ರ ಸಮರ್ಥ್ ರೈ)517), ಬಾಬು ಮತ್ತು ಪ್ರೇಮಾ ಇವರ ಪುತ್ರ ಮಿಲನ್ ಕುಮಾರ್(516), ರಾಘವ ಗೌಡ ಮತ್ತು ತಿರುಮಲೇಶ್ವರಿ ಇವರ ಪುತ್ರ ಮುರಳಿ ಕುಮಾರ್(515), ಬಾಲಕೃಷ್ಣ ಭಂಡಾರಿ ಮತ್ತು ಭಾಗ್ಯಜ್ಯೋತಿ ಇವರ ಪುತ್ರಿ ಮೋಕ್ಷಿತಾ(512), ಮಹಾಬಲ ಪೂಜಾರಿ ಮತ್ತು ಸವಿತಾ ಇವರ ಪುತ್ರಿ ಪ್ರೀತಿಕಾ(512), ಸುಂದರ ಹಾಗೂ ವೇದಾವತಿ ಇವರ ಪುತ್ರ ದೀಪಕ್À ಎಸ್.(510) ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ.