ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ ಗಿಡಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು., ಮುಖ್ಯಗುಎರು ಸರಸ್ವತಿರವರು, ಕಾಡು, ಮರಗಿಡಗಳ ಮಹತ್ವ ಮತ್ತು ಗಿಡ ನೆಟ್ಟು ಪೋಷಿಸುವ ಬಗ್ಗೆ ತಿಳಿಸಿದರು. ಶಿಕ್ಷಕಿ ವಿನಯ ವಿ ಶೆಟ್ಟಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿನಿ ಶ್ವಾವ್ಯ ಪರಿಸರದ ಬಗ್ಗೆ ಭಾಷಣ ಮಾಡಿದರು. ಶಿಕ್ಷಕಿ ಅನಿತಾ ಜೆ ರೈ, ಹೇಮಾ ನಾಗೇಶ್ ರೈ, ಚಿತ್ರಕಲಾ, ದೈಹಿಕ ಶಿಕ್ಷಕ ರಂಗನಾಥ್, ವನಿತಾ, ಜಯಚಂದ್ರ ಮತ್ತು ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಉಪಸ್ಥಿತರಿದ್ದರು.