ನೆಲ್ಯಾಡಿ ರಾಮನಗರ: ಬಡ ಮಹಿಳೆಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

0

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ರಾಮನಗರ ದರ್ಖಾಸು ದಿ| ರಮೇಶ್ ಗೌಡರವರ ಪತ್ನಿ ಮೋಹಿನಿ ಅವರ ಕುಟುಂಬಕ್ಕೆ ನೂತನ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಲಾಯಿತು.
ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಕುತ್ರಾಡಿ ಹಾರ್ಪಳ ಇಲ್ಲಿನ ಪ್ರಧಾನ ಅರ್ಚಕರಾದ ಶ್ರೀಧರ ನೂಜಿನ್ನಾಯ ಅವರು ವೈದಿಕ ವಿಧಿ ವಿಧಾನ ನೆರವೇರಿಸಿದರು. ನೂತನ ಮನೆ ದಾನಿಗಳ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶೀಘ್ರದಲ್ಲಿ ಪೂರ್ಣಗೊಳ್ಳಲಿ. ದೇವರು ಮೋಹಿನಿ ಅವರ ಕುಟುಂಬಕ್ಕೆ ಸಕಲ ಸೌಭಾಗ್ಯ ಕರುಣಿಸಲಿ ಎಂದು ಶ್ರೀಧನ ನೂಜಿನ್ನಾಯ ಅವರು ಪ್ರಾರ್ಥಿಸಿದರು. ನೂತನ ಮನೆಯ ವಾಸ್ತು ವಿನ್ಯಾಸಗಾರ ಇಂಜಿನಿಯರ್ ಶಿವಣ್ಣ ಹೆಗ್ಡೆ ಅವರು ಶುಭಹಾರೈಸಿದರು. ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತು, ಕೌಕ್ರಾಡಿ ಗ್ರಾ.ಪಂ.ಸದಸ್ಯ ಉದಯಕುಮಾರ್ ಗೌಡ ದೋಂತಿಲ, ನೆಲ್ಯಾಡಿ ಗ್ರಾ.ಪಂ. ಸದಸ್ಯ ರವಿಪ್ರಸಾದ ಶೆಟ್ಟಿ ರಾಮನಗರ, ಶ್ರೀ ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಾಳ ಇದರ ಅಧ್ಯಕ್ಷ ಶಿವಪ್ರಸಾದ್ ದುಗ್ಗಲ, ಪ್ರಗತಿಪರ ಕೃಷಿಕರಾದ ಶಿವರಾಮ ಗೌಡ ಮಕ್ಕಿಗದ್ದೆ, ರಮೇಶ ಗೌಡ ನಾಲ್ಗುತ್ತು, ನೆಲ್ಯಾಡಿ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ದೇಜಪ್ಪ ಗೌಡ ರಾಮನಗರ, ರಾಮನಗರ ಶ್ರೀ ವಿನಾಯಕ ಭಜನಾ ಮಂಡಳಿ ಮಾಜಿ ಅಧ್ಯಕ್ಷ ಸುಂದರ ಗೌಡ ಕಾನಮನೆ, ಕೃಷ್ಣಪ್ಪ ಗೌಡ ಮಕ್ಕಿಗದ್ದೆ, ಮನೆ ನಿರ್ಮಾಣದ ಮೇಸ್ತ್ರಿ ಸುಕುಮಾರ ಗೌಡ, ದೇವಕಿ ಮೂಲೆಮನೆ, ದಿ ರಮೇಶ ಗೌಡರ ಪತ್ನಿ ಮೋಹಿನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಾನಿಗಳು ಮತ್ತು ಸಂಘ ಸಂಸ್ಥೆಗಳು ಸಹಕಾರವನ್ನು ನೀಡಿ ತನ್ನ ಕುಟುಂಬಕ್ಕೆ ಆಸರೆಯನ್ನು ನೀಡುವಂತೆ ದಿ| ರಮೇಶ ಗೌಡರವರ ಪತ್ನಿ ಮೋಹಿನಿ ಅವರು ವಿನಂತಿಸಿದರು.

LEAVE A REPLY

Please enter your comment!
Please enter your name here