ಪುತ್ತೂರು:ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಕರು ಮಾರಾಟದ ವಿಚಾರವಾಗಿ ಹಲ್ಲೆ ನಡೆದು ಮೂವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಕುರಿತು ವರದಿಯಾಗಿದೆ.
ರಿಜ್ವಾನ್ ಎಂಬವರು ಆರ್ಯಾಪು ಗ್ರಾಮದ ಅಜಿತ್ ಎಂಬವರಿಗೆ ಕರುವೊಂದನ್ನು ನೀಡಿದ್ದರು.ಆದರೆ ಮೂರು ತಿಂಗಳ ಕರುವಿನ ಬದಲು ಒಂದು ತಿಂಗಳ ಕರು ನೀಡಿ, ಹೆಚ್ಚಿಗೆ ಹಣವನ್ನು ಪಡೆದು ವಂಚಿಸಲಾಗಿದೆ ಎಂದು ಹೇಳಿ ಕರುವನ್ನು ವಾಪಸ್ ಕೊಂಡುಹೋಗುವಂತೆ ಅಜಿತ್ ಅವರು ರಿಜ್ವಾನ್ ಅವರಿಗೆ ತಿಳಿಸಿದ್ದರು.ಈ ವಿಚಾರವಾಗಿ ಜೂ.20ರಂದು ಕಲ್ಲರ್ಪೆಯಲ್ಲಿ ಅಜಿತ್ ಮತ್ತು ರಿಜ್ವಾನ್ ಅವರ ಮಧ್ಯೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಿದೆ.ಈ ಸಂದರ್ಭ ಅಜಿತ್ ಅವರ ಜೊತೆಗಿದ್ದ ಆರ್ಯಾಪು ಗ್ರಾ.ಪಂ ಸದಸ್ಯ ಅಶೋಕ್ ಅವರಿಗೂ ಗಾಯವಾಗಿದೆ.ಮೂವರೂ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.