ಪುತ್ತೂರು: ರಸ್ತೆ ಬದಿಯ ಗಿಡಗಂಟಿಗಳ ತೆರವು ಕಾರ್ಯಕ್ಕೆ ಸಂಬಂಧಿಸಿ ಪೌರ ಕಾರ್ಮಿಕರ ಜೊತೆ ತಾನೆ ಸ್ವತಃ ಕತ್ತಿ ಹಿಡಿದು ಕೊಂಡು ಗಿಡಗಂಟಿಗಳನ್ನು ತೆರವು ಮಾಡಿದ ನಗರಸಭಾ ಸದಸ್ಯ ನವೀನ್ ಪೆರಿಯತ್ತೋಡಿ ಅವರು ಮಾದರಿಯಾಗಿದ್ದಾರೆ.
ಜು. 6ರಂದು ನಗರಸಭಾ ವ್ಯಾಪ್ತಿಯ ಪೆರಿಯತ್ತೋಡಿ ಪರಿಸರದಲ್ಲಿ ರಸ್ತೆ ಬದಿಯ ಗಿಡಗಂಟಿಗಳ ತೆರವು ಕಾರ್ಯಾಚರಣೆಯನ್ನು ಮಾಡುತ್ತಿದ್ದ ಪೌರ ಕಾರ್ಮಿಕರ ಜೊತೆಗೆ ತಾನು ಸ್ವತಃ ಸೇರಿಕೊಂಡು ಗಿಡಗಂಟಿಗಳ ತೆರವು ಮಾಡಿದರು. ತಾನೊಬ್ಬ ನಗರಸಭಾ ಸದಸ್ಯನಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸಿರುವುದು ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.