ಪುತ್ತೂರು: ಕಿಡ್ನಿ ಖಾಯಿಲೆಯಿಂದ ನಿಧನರಾದ ಕುಂಬ್ರ ಸಾಯಿ ಸ್ಟುಡಿಯೋದ ಶಿವಪ್ರಸಾದ್ ಆಳ್ವರವರ ಕುಟುಂಬಕ್ಕೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಪುತ್ತೂರು ವಲಯದಿಂದ ಧನಸಹಾಯದ ಚೆಕ್ ನೀಡಲಾಯಿತು. ಶಿವಪ್ರಸಾದ್ ಆಳ್ವರವರ ಪತ್ನಿ ದೀಪಾರವರಿಗೆ ಅವರ ಮನೆಯಲ್ಲಿ ಚೆಕ್ ಹಸ್ತಾಂತರಿಸಲಾಯಿತು.
ಅಸೋಸಿಯೇಷನ್ ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ, ಪುತ್ತೂರು ಘಟಕದ ಅಧ್ಯಕ್ಷ ನಾಗೇಶ್ ಟಿ.ಎಸ್, ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್, ಕೋಶಾಧಿಕಾರಿ ಗಿರಿಧರ್ ಭಟ್, ಸಂಘಟಣಾ ಕಾರ್ಯದರ್ಶಿ ರಘು ಶೆಟ್ಟಿ, ರಮೇಶ್ ಬೊಳ್ಳಾಡಿ ಉಪಸ್ಥಿತರಿದ್ದರು