ಪುತ್ತೂರು: ಬಪ್ಪಳಿಗೆ ಬೈಪಾಸ್ ಆಶ್ಮಿ ಕಂಫರ್ಟ್ ನಲ್ಲಿ ಜು.4ರಂದು ನಡರದ ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ ನ ಪದ ಪ್ರದಾನ ಸಮಾರಂಭದಲ್ಲಿ ವೊಕೇಶನಲ್ ಸರ್ವೀಸ್ ನಡಿಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು ತಜ್ಞ ಡಾ ಅಜಯ್ ಯವರಿಗೆ ಸನ್ಮಾನಿಸಲಾಯಿತು.
ಡಾ.ಅಜಯ್ ರವರ ಉತ್ತಮ ಸೇವೆ,ಜನಾನುರಾಗಿಯಾಗಿ ರೋಗಿಗಳ ಮತ್ರು ಸಾರ್ವಜನಿಕರ ಪ್ರಶ೦ಸೆಗೆ ಅನುಗುಣವಾಗಿ ತನ್ನ ಸಮಯಕಿಂತ ಹೆಚ್ಚಿನ ಕರ್ತವ್ಯ ನಿರ್ವಹಿಸುತ್ತಾ ಕರ್ತವ್ಯ ನಿಷ್ಟೆ ಮೆರೆಯುತ್ತಾ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 2018 ರ ನಂತರ 2600ಕಿಂತಲೂ ಅಧಿಕ ಸರ್ಜರಿಗಳನ್ನ ಯಶಸ್ವಿಯಾಗಿ
ನಡೆಸಿ ಸಾರ್ವಜನಿಕರ ಮೆಚ್ಚುಗೆ ಪಡೆದಿರುತ್ತಾರೆ.
ಸನ್ಮಾನ ಸಂದರ್ಭದಲ್ಲಿ ಪಿಡಿಜಿ ಜೋಸೆಫ್ ಮ್ಯಾಥ್ಯೂ, ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ, ವಲಯ ಸೇನಾನಿ ಡಾ.ಹರ್ಷಕುಮಾರ್ ರೈ,ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ರೋಟರಿ ಸೆಂಟ್ರಲ್ ಅಧ್ಯಕ್ಷ ಮಹಮದ್ ರಫೀಕ್, ಕಾರ್ಯದರ್ಶಿ ಚಂದ್ರಹಾಸ ರೈ, ನಿಕಟಪೂರ್ವ ಅಧ್ಯಕ್ಷ ನವೀನ್ ಚಂದ್ರ ನಾಯಿಕ್ ಉಪಸ್ಥಿತರಿದ್ದರು.
ನಿರಂತರ ತನ್ನ ಸೇವಾ ಅವದಿಯಲ್ಲಿ ದಿನಾ 200ಕಿಂತಲೂ ಅಧಿಕ ರೋಗಿಗಳನ್ನ ನಗುಮೊಗದಿಂದಲೇ ಸ್ಪಂದಿಸುತ್ತಾ ರೋಗಿಗಳ ಮನಸ್ಸಿನಲ್ಲಿ ಮನೆಮಾತಾಗಿದ್ದಾರೆ.